ಉಡುಪಿ: ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ಪ್ರಕರಣಗಳಲ್ಲಿ ಬಂಧಿತ ಆರೋಪಿಯ ಬಂಧನ ಆದೇಶವನ್ನು ಬೆಂಗಳೂರಿನ ಹೈಕೋರ್ಟ್ ಪೀಠ ಎತ್ತಿ ಹಿಡಿದಿದ್ದು, ಆರೋಪಿಗೆ ಮೇ ೨೦ರಿಂದ ೧ ವರ್ಷದ ವರೆಗೆ ಬಂಧನ ಆದೇಶವನ್ನು ಸ್ಥಿರೀಕರಿಸಿದೆ.
ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ಪ್ರಕರಣಗಳಲ್ಲಿ ನಿರಂತರವಾಗಿ ಭಾಗಿಯಾಗಿ ಸಮಾಜದ ಸ್ವಾಸ್ಥö್ಯವನ್ನು ಹಾಳುಗೆಡವುತ್ತಿದ್ದ ಆರೋಪಿ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಉಪ್ಪೂರು ಗ್ರಾಮದ ಕೊಳಲಗಿರಿ ಚಕ್ಕುಲಿಕಟ್ಟೆಯ ಕೃಷ್ಣ ಆಚಾರಿ ಅಲಿಯಾಸ್ ಕೃಷ್ಣ ಜಲಗಾರ (೪೩) ಎಂಬಾತನ ವಿರುದ್ಧ ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಬಂಧನ ಕ್ರಮ ಜರುಗಿಸಲು, ಉಡುಪಿ ಸೆನ್ ಅಪರಾಧ ಠಾಣೆಯ ಪೊಲೀಸ್ ನಿರೀP್ಷÀಕರ ಮುಖಾಂತರ ಬಂದ ವರದಿಯನ್ನು ಎಸ್ಪಿ ಬಂಧನ ಆದೇಶಕ್ಕಾಗಿ ಮಂಗಳೂರು ಪಶ್ಛಿಮ ವಲಯ ಐಜಿಪಿಯವರಿಗೆ ಸಲ್ಲಿಸಿದ್ದರು.
ಆತನ ವಿರುದ್ಧ ದಾಖಲಾದ ಪ್ರಕರಣಗಳನ್ನು ಪರಿಶೀಲಿಸಿ, ಮೇ ೧೯ರಂದು ಬಂಧನ ಆದೇಶ ಹೊರಡಿಸಿದ್ದು, ಬ್ರಹ್ಮಾವರ ಎಸ್ಸೆÊ ಮೇ ೨೦ರಂದು ಆರೋಪಿಯನ್ನು ಬಂಧಿಸಿ ಧಾರವಾಡ ಸೆಂಟ್ರಲ್ ಜೈಲಿಗೆ ಕಳುಹಿಸಿ ಕೊಡಲಾಗಿತ್ತು. ಜು.೧ರಂದು ಬೆಂಗಳೂರಿನ ಹೈಕೋರ್ಟ್ ಪೀಠದಲ್ಲಿ ಈ ಕಾಯ್ದೆಯನ್ವಯ ಹೊರಡಿಸಲಾದ ಬಂಧನ ಆದೇಶದ ಬಗ್ಗೆ ವಿಚಾರಣೆ ನಡೆದು, ಹೈಕೋರ್ಟ್ ಪೀಠವು ಪೊಲೀಸ್ ಮಹಾನಿರೀP್ಷÀಕರು, ಪಶ್ಚಿಮ ವಲಯ, ಮಂಗಳೂರುರವರ ಆದೇಶವನ್ನು ಎತ್ತಿ ಹಿಡಿದು ಬಂಧಿತ ಆರೋಪಿಗೆ ಮೇ ೨೦ರಿಂದ ೧ ವರ್ಷದ ವರೆಗೆ ಬಂಧನ ಆದೇಶವನ್ನು ಸ್ಥಿರೀಕರಿಸಿದೆ. ಬಂಧಿತ ಆರೋಪಿ ವಿರುದ್ಧ ಒಟ್ಟು ೪ ಪ್ರಕರಣ ದಾಖಲಾಗಿದ್ದು, ಅವುಗಳಲ್ಲಿ ೨ ಪ್ರಕರಣಗಳಲ್ಲಿ ಸಜೆಯಾಗಿದ್ದು, ಇನ್ನುಳಿದ ೨ ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿದೆ